Shivaji & Guruji Jayanti @ RVK – Kalaburagi

Kalaburagi, Feb 19 : Shivaji Maharaj and Guruji Golwalkar (Second Sarasanghchalak of RSS) Jayanti were observed herein Rashtrotthana Vidya Kendra.

ಕಲಬುರಗಿ, ಫೆಬ್ರವರಿ 19 : ನಗರದ ಶರಣಶಿರಸಗಿಯಲ್ಲಿರುವ ರಾಷ್ಟ್ರೋತ್ಥಾನ ವಿದ್ಯಾ ಕೇಂದ್ರದಲ್ಲಿ ಈ ದಿನ ಶಿವಾಜಿ ಜಯಂತಿ ಹಾಗೂ ಗುರೂಜಿ ಜಯಂತಿಯನ್ನು ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಾಚಾರ್ಯರಾದ ಶ್ರೀ ಗಿರೀಶ್ ಜೋಶಿಯವರು ಹಿಂದವಿ ಸ್ವರಾಜ್ ಸಂಸ್ಥಾಪಕರಾದ ಛತ್ರಪತಿ ಶಿವಾಜಿ ಮಹಾರಾಜರ ಕಥೆಗಳನ್ನು ಹೇಳುತ್ತಾ ಹಿಂದೂ ಧರ್ಮದ ಪುನರ್ ಪ್ರತಿಷ್ಠಾಪನೆ ಮಾಡಲು ಶಿವಾಜಿ ಮಹಾರಾಜರಂತಹ ಮಹಾನ್ ಚೇತನಗಳು ಪುನಃ ಪುನಃ ಆವಿರ್ಭವಿಸುತ್ತಾರೆ ಎಂದರು. ಅದೇ ರೀತಿ ಸಂಘದ ಎರಡನೇ ಸರಸಂಘಚಾಲಕರಾದ ಶ್ರೀ ಗುರೂಜಿ ಶ್ರೀ ಮಾಧವ ಸದಾಶಿವ ಗೋಳ್ವಲ್ಕರ್ ಅವರ ಕಥೆಗಳನ್ನು ಹೇಳುತ್ತಾ. ಸಂಘಕ್ಕೆ ಹೊಸ ಆಯಾಮಗಳನ್ನು ನೀಡಿದರು ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಶಿಕ್ಷಕ ಶಿಕ್ಷಕರೇತರ ಸಿಬ್ಬಂದಿ ವರ್ಗದವರು ಹಾಗೂ ಮಕ್ಕಳು ಪಾಲ್ಗೊಂಡಿದ್ದರು.

Scroll to Top